Friday, May 31, 2013

'Brahma' in Mysore

It is 'Mylari Enterprises' from director cum producer R Chandru. He has floated the banner with his 100 days cinema 'Mylari' starring Shivarajakumar and Sada. The film floated in this banner is 'Brahma' for producer Manjunatha Babu (Amrutha Halli).

After launch in Bangalore Palace and son recording muhurth in Gurukiran Studio the film 'Brahma' starring Upendra went straight to Lalith Mahal Palace in Mysore for eight days shooting.

Upendra, Nazar, Sayyaji Shinde and others took part in the thrilling scenes that were handled by thriller Manju. After this schedule director R Chandru is moving to Bangkok portion of shooting.

R Chandru has written the story, screenplay, dialogues and directing the film. Gurukiran is music director, Shekar Chandra is cameraman, KM Prakash is editor, Shivakumar, Ismail art director, Vijay and Thriller Manju in stunts, Pradeep Antony choreography technical team of the director. The star cast is also interesting. Upendra, Pranitha, Rangayana Raghu, Sadhu Kokila, Sayyaji Shinde, Nazar, Rahul Dev, Sonu Soodh, Suhasb Shetty, Dr Girish Karnad, Kaat Raju, Bullet Prakash, John Kokkin, Mangalore Suresh, Lakshman, Sharan, Padmaja Rao, Suchindra Prasad and others form star cast of 'Brahma'.

Thursday, May 30, 2013

Sai-Uppi in 'Gowri'

A remake of super hit Telugu film 'Lakshmi' starring Victory Venkatesh and a number of actors from Telugu cinema is now 'Gowri' in Kannada starring Upendra and some popular faces of Kannada cinema industry.

Victory Venkatesh was 'Lakshmi Narayan' in the Telugu film 'Lakshmi' but in 'Gowri' Upendra is 'Gowrishanker' in the film. This film is going on floor after 'Kaligaala'. Om Saiprakash has already consulted Parul Yadav and Aindrita Ray. Advance has been given to Upendra for this remake film says Sai Prakash.

'Lakshmi' Telugu film released in January 2006 starred Venkatesh, Nayanthara, Charmme Kaur and others in the direction of VV Vinayak. It was dubbed in to Malayalam and Hindi languages too.

It will be a sure shot film in the box office. The screenplay and contents are good in Telugu films. Apparently Upendra played the lead role with Ramya in 'Gowramma' a super hit film. 'Gowri' of Sai and Uppi will be the 99th film in the list of renowned director Saiprakash. Parul Yadav and Aindrita Ray with Upendra is for the first time. This 'Gowri' in the direction of Om Saiprakash is after 'Brahma' of Upendra.

Friday, May 17, 2013

ಉಪ್ಪಿ ಟಿಪಿಕಲ್ ಸಾಂಗ್

ಉಪೇಂದ್ರ ಅವರ ವೃತ್ತಿ ಜೀವನದಲ್ಲಿಯೇ ವಿಶೇಷ ಚಿತ್ರವೆಂದು ಭಾವಿಸಲಾಗುತ್ತಿರುವ ಬ್ರಹ್ಮ ಚಿತ್ರದ ಹಾಡುಗಳು ಸಂಗೀತ ಸಂಯೋಜನೆಗೆ ಒಳಗಾಗಿವೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಕವಿರಾಜ್, ಹೃದಯಶಿವ ಸಾಹಿತ್ಯ ಬರೆಯುತ್ತಾರಂತೆ.

ಚಿತ್ರಕ್ಕೆ ಸಂಗೀತ ಗುರುಕಿರಣ್ ಸಂಗೀತ ನೀಡುತ್ತಿದ್ದು, ಎಲ್ಲಾ ಹಾಡುಗಳು ಕಮರ್ಷಿಯಲ್ ರೀತಿಯಲ್ಲಿ ಇರುತ್ತವೆಯಂತೆ. ಸಂಗೀತ ನಿರ್ದೇಶಕರು ಉಪೇಂದ್ರ ಜತೆ ಕೆಲಸ ಮಾಡಿದ್ದಾರೆ, ನಿರ್ದೇಶಕ ಚಂದ್ರು ಜತೆಗೂ ಮೈಲಾರಿ, ಚಾರ್‌ಮಿನಾರ ಚಿತ್ರದಲ್ಲೂ ಜತೆಯಾಗಿದ್ದಾರೆ. ಹೀಗಾಗಿ ಬ್ರಹ್ಮ ಚಿತ್ರದ ಹಾಡುಗಳು ವಿಶೇಷವಾಗಿ ಮೂಡಿ ಬರಲಿವೆ ಅಂತಾರೆ.

ಚಿತ್ರದಲ್ಲಿ ಉಪೇಂದ್ರ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಎರಡಕ್ಕೂ ಇಂಟ್ರಡಕ್ಷನ್ ಸಾಂಗ್ ಬಳಕೆ ಆಗುತ್ತವೆಯಂತೆ. ಒಂದು ಡ್ಯುಯೆಟ್, ಒಂದು ಮೆಲೊಡಿ, ಮತ್ತೊಂದು ಉಪೇಂದ್ರ ಅವರ ಪಕ್ಕಾ ಟಿಪಿಕಲ್ ಶೈಲಿಯಲ್ಲಿ ಇರಲಿದೆಯಂತೆ.

ನಾಯಕ ಉಪೇಂದ್ರ ಮತ್ತು ನಿರ್ದೇಶಕ ಚಂದ್ರು ಇಬ್ಬರೂ ಸಾಹಿತ್ಯ ಬಲ್ಲವರು. ಹಾಡುಗಳನ್ನೂ ಬರೆದಿದ್ದಾರೆ. ಹೀಗಾಗಿಯೇ ಸಾಹಿತ್ಯ ಮತ್ತು ಸಂಗೀತ ಎರಡಕ್ಕೂ ಜುಗಲ್ಬಂದಿ ನಡೆಯಲಿದೆಯಂತೆ. ಹಾಡುಗಳ ಚಿತ್ರೀಕರಣಕ್ಕೆ ವಿದೇಶಕ್ಕೆ ಹೋಗುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಅರಮನೆಯ ಸೆಟ್ ಹಾಕಲಿದ್ದಾರಂತೆ. ಅಲ್ಲಿ ಒಂದು ಹಾಡಿನ ಚಿತ್ರೀಕರಣ ನಡೆಯಲಿದೆ.

ಮೈಲಾರಿ ಚಿತ್ರದಲ್ಲಿ ಹಾಡುಗಳು ಹಿಟ್ ಆಗಿದ್ದವು. ಈ ಬಾರಿಯೂ ಅದು ಮುಂದುವರೆಯಲಿದೆ ಅಂತಾರೆ ಗುರುಕಿರಣ್. ಮೊನ್ನೆ ತಾನೆ ಹಾಡುಗಳ ಸಂಯೋಜನೆಗೆ ಕೂತಿರುವ ಇವರು, ಎರಡು ತಿಂಗಳಲ್ಲಿ ಪ್ರೇಕ್ಷಕರಿಗೆ ಹಾಡು ಕೇಳಿಸುತ್ತಾರಂತೆ. ಕತೆಯಷ್ಟೇ ಹಾಡಿಗೂ ನಾನು ಪ್ರಾಮುಖ್ಯತೆ ಕೊಡುವೆ. ಹಾಡು ಮತ್ತು ಕತೆಯು ರಥದ ಎರಡು ಗಾಲಿಗಳಿದ್ದಂತೆ ಎರಡೂ ಸಮಗತಿಯಲ್ಲಿ ಸಾಗಿದರೆ, ಅದು ಯಶಸ್ಸಿನ ಪಯಣ. ಅಂತಹ ಪಯಣಕ್ಕೆ ಗುರುಕಿರಣ್ ಹಾಡುಗಳು ಸಾಥ್ ನೀಡುತ್ತವೆ ಅಂತಾರೆ ನಿರ್ದೇಶಕ ಚಂದ್ರು. ಎರಡು ಭಾಷೆಯಲ್ಲಿ ಇದು ಏಕಕಾಲಕ್ಕೆ ಚಿತ್ರೀಕರಣ ಆಗುವುದರಿಂದ ಪಕ್ಕಾ ಕಮರ್ಷಿಯಲ್ ಆಗಿ ಹಾಡುಗಳನ್ನು ಬಳಸಿಕೊಳ್ಳುತ್ತಿದ್ದೇನೆ. ಎರಡು ಭಾಷೆಯಲ್ಲೂ ಹಾಡುಗಳು ಹಿಟ್ ಆಗುತ್ತವೆ ಎಂಬ ನಂಬಿಕೆ ಇದೆ ಅಂತಾರೆ. ಹಾಡುಗಳ ಚಿತ್ರೀಕರಣಕ್ಕೆ ಈಗಾಗಲೇ ಪ್ಲ್ಯಾನ್ ಮಾಡಿರುವ ಚಿತ್ರತಂಡ, ಒಳ್ಳೊಳ್ಳೆ ಸ್ಥಳಗಳನ್ನು ನೋಡಿಕೊಂಡು ಬಂದಿದ್ದಾರಂತೆ. ಶೇಖರ್ ಚಂದ್ರ ಅವರ ಸಿನಿಮಾಟೋಗ್ರಫಿಯಲ್ಲಿ ಹಾಡುಗಳು ಮೂಡಿ ಬರಲಿದ್ದು, ಪಿ.ವಿ.ಮಂಜುನಾಥ್ ಬಾಬು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಬ್ರಹ್ಮ ರೂಪತಾಳಲಿದ್ದಾನೆ.
-----

ಚಿತ್ರದಲ್ಲಿ ಐದು ಹಾಡುಗಳು ಇರುತ್ತವೆ. ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್ ಬಳಸಿಕೊಂಡು ಗುರುಕಿರಣ್ ಕಂಪೋಸ್ ಮಾಡುತ್ತಿದ್ದಾರೆ. ಉಪೇಂದ್ರ ಅವರು ಎರಡು ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ, ಎರಡು ಇಂಟ್ರಡಕ್ಷನ್ ಹಾಡು ಇರಲಿವೆ.
* ಆರ್.ಚಂದ್ರು, ನಿರ್ದೇಶಕರು

ಕನಕಪುರ ಶ್ರೀನಿವಾಸ್‌ ಮಗನ ನಿಶ್ಚಿತಾರ್ಥದಲ್ಲಿ ಭೇಟಿ ಆಗಿದ್ದರಂತೆ ಉಪೇಂದ್ರ ಮತ್ತು ನಿರ್ದೇಶಕ ಆರ್‌. ಚಂದ್ರು. ನೀವು ನಮ್ಗೆಲ್ಲಾ ಕಥೆ ಮಾಡಲ್ಲ ಎಂದರಂತೆ ಉಪೇಂದ್ರ. ನೀವು ಡೇಟ್‌ ಕೊಟ್ಟರೆ ಕಥೆ ಏನು, ಸಿನಿಮಾನೇ ಮಾಡ್ತೀನಿ ಅಂದ್ರಂತೆ ಆರ್‌. ಚಂದ್ರು. ಹೀಗೆ ಶುರುವಾದ 'ಬ್ರಹ್ಮ' ಈಗ ಚಿತ್ರೀಕರಣದ ಲೆವೆಲ್‌ಗೆ ಬಂದು ನಿಂತಿದೆ. ಈ ಮಧ್ಯೆ ಫೋಟೋ ಶೂಟ್‌ ಆಗಿದೆ, ಹಾಡುಗಳ ರೆಕಾರ್ಡಿಂಗ್‌ ಶುರುವಾಗಿದೆ ಇತ್ಯಾದಿ ಇತ್ಯಾದಿ ... ಚಂದ್ರು ಮಾತನಾಡಿದ್ದು ಅದೇ ಹಾಡುಗಳ ರೆಕಾರ್ಡಿಂಗ್‌ ಪತ್ರಿಕಾಗೋಷ್ಠಿಯಲ್ಲಿ. ಸ್ಥಳ ಗುರುಕಿರಣ್‌ರ ಚಂದ್ರ ಲೇಔಟ್‌ನ ಮನೆ.

ಇದುವರೆಗೂ ಚಂದ್ರು ಪ್ರಮಕಥೆಗಳನ್ನೇ ಹೆಚ್ಚು ನಿರ್ದೇಶಿಸಿದ್ದು. ಆದರೆ, 'ಬ್ರಹ್ಮ' ಒಂದು ಆ್ಯಕ್ಷನ್‌ ಚಿತ್ರ ಎನ್ನುತ್ತಾರೆ ಚಂದ್ರು. ಅಷ್ಟೇ ಅಲ್ಲ, ಪ್ರೀತಿ, ಕಾಮಿಡಿ, ಐತಿಹಾಸಿಕ ಎಲ್ಲವೂ ಇದೆಯಂತೆ. ಸಾಲದ್ದಕ್ಕೆ 16ನೇ ಶತಮಾನದಲ್ಲಿ ಶುರುವಾಗುವ ಕಥೆ, ಈ ಜಮಾನಗೆ ಬಂದು ನಿಲ್ಲುತದಂತೆ. ಚಂದ್ರು ಇಷ್ಟು ಹೇಳುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಯಾಯಿತು. ಹಾಗಾದರೆ ಇದು 'ಮಗಧೀರ' ರೀಮೇಕಾ?

ಖಂಡಿತಾ ಇಲ್ಲ ಎನ್ನುತ್ತಾರೆ ಚಂದ್ರು. ಆ ಚಿತ್ರ ನೋಡಿ ಸ್ಫೂರ್ತಿಗೊಂಡಿದ್ದು ನಿಜವಂತೆ. ಆದರೆ, ಇದು ಅದಲ್ಲ ಎಂಬುದು ಚಂದ್ರು ಅಭಿಪ್ರಾಯ. 'ಇದು ಪುನರ್ಜನ್ಮದ ಕಥೆಯಲ್ಲ. ಒಂದು ವಂಶದ ಕಥೆ. ಇಲ್ಲಿ ನಾಯಕ ಒಬ್ಬ ಯೋಧನಾಗಿರುತ್ತಾನೆ. ಕಟ್‌ ಮಾಡಿದ್ರೆ ಈಗಿನ ಕಾಲದಲ್ಲಿ ಇನ್ನೊಂದು ಪ್ರಮುಖ ಪಾತ್ರವಿದೆ. ಚಿತ್ರದಲ್ಲಿ ಉಪೇಂದ್ರ ಎರಡು ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನಾಯಕಿಯ ಹುಡುಕಾಟ ನಡೆದಿದೆ. ತ್ರಿಷಾರನ್ನು ಕೇಳಿದೆವು. ಅವರು ಆಸಕ್ತಿ ತೋರಿಸಲಿಲ್ಲ. ನ್ನು ಸಯ್ನಾಜಿ ಶಿಂಧೆ, ನಾಜರ್‌ ಮುಂತಾದವರು ಅಭಿನಯಿಸುತ್ತಿದ್ದಾರೆ' ಎಂದು ಪಟ್ಟಿ ಕೊಟ್ಟರು ಚಂದ್ರು.

ಇಷ್ಟು ಹೇಳುತ್ತಿದ್ದಂತೆ, 'ಇನ್ನೊಂದು ವಿಷಯ ಮರೆತಿದ್ದೆ' ಎಂದು ನೆನಪಿಸಿಕೊಂಡು ಹೇಳಿದರು ಚಂದ್ರು. ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಅವರು ನಿರ್ದೇಶಿಸುತ್ತಿದ್ದಾರೆ. ಅದೇ ಕಾರಣಕ್ಕೆ ಎರಡು ಭಾಷೆಗಳ ಕಲಾವಿದರು ಇರುತ್ತಾರೆ. ಇಷ್ಟು ಹೇಳುತ್ತಿದ್ದಂತೆ, ಪತ್ರಕರ್ತರಿಂದ ಬಂದ ಮೊದಲ ಪ್ರಶ್ನೆ ...

ಬಜೆಟ್‌ ಎಷ್ಟು?
ಚಂದ್ರ ನಕ್ಕರು. ಅದನ್ನೆಲ್ಲಾ ತಮ್ಮ ನಿರ್ಮಾಪಕರಿಗೆ ಬಿಟ್ಟು ಇರುವುದಾಗಿ ಹೇಳಿದರು. ನಿರ್ಮಾಪಕ ಮಂಜುನಾಥ ಬಾಬು, ಚಂದ್ರು ಹಳೆಯ ಸ್ನೇಹಿತರಂತೆ. 'ಚಾರ್‌ಮಿನಾರ್‌' ಚಿತ್ರದಿಂದ ನಿರ್ಮಾಪಕರು ಅರ್ಧಕ್ಕೆ ಹೋದಾಗ, ಇದೇ ಮಂಜುನಾಥ ಬಾಬು ಬಡ್ಡಿ ಇಲ್ಲದೆ ಸಾಲ ಕೊಟ್ಟರಂತೆ. ಈಗ ಈ ಚಿತ್ರವನ್ನು ನಿರ್ಮಿಸುವುದರ ಮೂಲಕ ನಿರ್ಮಾಪಕರಾಗುತ್ತಿದ್ದಾರೆ. ಬಾಬು ಬಜೆಟ್‌ ಎಷ್ಟಾದರೂ ರೆಡಿ ಎಂದರು.
ಇನ್ನು ಗುರುಕಿರಣ್‌ಗೆ ಇಲ್ಲಿ ಹಾಡುಗಳಿಗಿಂಥ ಹಿನ್ನೆಲೆ ಸಂಗೀತ ಸವಾಲಿನ ಕೆಲಸವಂತೆ. ಎರಡೂ ಕಾಳಘಟ್ಟಕ್ಕೆ ತಕ್ಕ ಹಾಗೆ ಸಾಹಸ ಸಂಯೋಜಿಸುವುದು ಸವಾಲು ಎಂದರು ಥ್ರಿಲ್ಲರ್‌ ಮಂಜು. ಇನ್ನು ಅದನ್ನೆಲ್ಲ ಸಮರ್ಥವಾಗಿ ಸೆರೆಹಿಡಿಯಬೇಕು ಎಂಬುದು ಛಾಯಾಗ್ರಾಹಕ ಶೇಖರ್‌ ಚಂದ್ರುಗಿರುವ ಸವಾಲು. ಎಲ್ಲರದ್ದೂ ಆಯಿತು. ಮುಖ್ಯವಾಗಿ ಉಪೇಂದ್ರ ಎಲ್ಲಿ ಎಂದು ನೀವು ಕೇಳಬಹುದು? ಉಪೇಂದ್ರ ಅಷ್ಟರಲ್ಲಿ ಫ್ಯಾಮಿಲಿ ಸಮೇತರಾಗಿ ದುಬೈಗೆ ಹಾರಿದ್ದರು.

Thursday, May 16, 2013

Uppi is 'Basavanna'!

The dashing Upendra is in the combination of 'Dhandupalya' Srinivasa Raju as director. The title is 'Basavanna' - it is not related to 12century revolutionary social reformer says director Srinivasaraju. Getting controversy to the film is not ruled out like his faced it for 'Dhandupalya'.

Uppi taken up 'Brahma' on Thursday at a star studded muhuruth in Bangalore Palace and after finishing project for R Chandru the project of Srinivasa Raju 'Basavanna' is going on the floor. The title has been approved at the KFCC.

Before finalizing on 'Basavanna' - Hara Hara Mahadev was thought as the title. The discussion of this film took place at the Katari Veera Sura Sundarangi time.

Upendra home production for which his wife Priyanka is the producer goes to September 18 birthday of Upendra. Meanwhile this film 'Basavanna' has got nothing to do with the 12th century reformer Basavanna. It is going to make some news with the title like how the ruckus happened for 'Masthi' Kannada cinema of Upendra.

Tuesday, May 14, 2013

Bisi Bisi Kodubale -srini

ಕೋಡುಬಳೆ , ಅರೇ  ಏನಿದು ಕೋಡುಬಳೆ ಅಂಥಾ ಇದ್ದೀರಾ  ಬ್ಲಾಕ್ ಬಸ್ಟರ್ ಮೂವಿ  ಟೋಪಿವಾಲ  ಖ್ಯಾತಿಯ ಶ್ರೀನಿ ಯವರು ಯಂಗ್  ಕ್ರಿಯೇಟಿವ್ ಡೈರೆಕ್ಟರ್ ಆಗಿ ಹೊರಹೊಮ್ಮಿ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ ಅದೇ "ಕೋಡುಬಳೆ". +ಇದೇನಿದು ತಿಂಡಿ ಹೆಸರು ಇಟ್ಟಿದಿರಲ್ಲ ಎಂದು ಶ್ರೀನಿಯವರಿಗೆ ಕೇಳಿದಾಗ  ನಮಗೆ ಸಿಕ್ಕಿದ್ದು ಬರೀ  ಕಾದುನೋಡಿ ಎನ್ನುವ ಪದ ಮಾತ್ರ. ಪ್ರತಿ end ನಲ್ಲೂ ಒಂದು start ಇದೆಯೆಂಬ  ವೇದಾಂತದ ಅರ್ಥಪೂರ್ಣ  ಅಡಿಬರಹ ಇಟ್ಟುಕೊಂಡು ಸಿನೆಮಾ ಮಾಡಲು ಹೊರಟಿದ್ದಾರೆ ಶ್ರೀನಿ.

ಇನ್ನು ರುಚಿಕರವಾದ ಸಿನೆಮಾ ಮಾಡಲು ಶ್ರೀನಿಯವರು ಹೊಸಬರ ಶೋಧನೆಯಲ್ಲಿದ್ದಾರೆ ಯಂಗ್ ಟಾಲೆಂಟೆಡ್ ಹುಡುಗರೆಲ್ಲ ಸೇರಿ ಮಾಡುತ್ತಿರುವ ಈ ಸಿನೆಮಾ ಹೆಂಗ್ ಇರುತ್ತೆ ಎಂದು ಕಾದು  ನೋಡಬೇಕು. ಕೆಲವು ಬಲ್ಲ ಮೂಲಗಳ ಪ್ರಕಾರ ಈ ಚಿತ್ರಕ್ಕೆ ಸಂಗೀತ ನಿರ್ದೇಶಕರು ರಾಘವೇಂದ್ರ ಥಾಣೆ.  ಇವರಿಗೆ  ಖ್ಯಾತ ಸಂಗೀತ ನಿರ್ದೇಶಕರಾದ ವಿ ಮನೋಹರ್ ರೊಡನೆ  ಕೆಲಸ ಮಾಡಿದ ಅನುಭವವಿದೆ. ಸಂಕಲನಕಾರರಾಗಿ ಹೊಸ ಪ್ರತಿಬೆ  ವಿಕ್ರಮ್ ಶ್ರೀಧರ್ ಜೊತೆಗಿದ್ದರೆ. ಕೋಡುಬಳೆ ಚಿತ್ರಕ್ಕೆ  ಕ್ರಿಯೇಟಿವ್ ಇಂಡಿಪೆಂಡೆಂಟ್ ಫಿಲಂ ಮೇಕರ್ ಅನೂಪ್ ಅಂಟೋನಿ ಯವರು ಶ್ರೀನಿ ರವರ ಹೊಸ ಟೀಂ ಗೆ ಸೇರ್ಪಡೆಯಾಗಿದ್ದಾರೆ .

ಇನ್ನು ವುಳಿದ ತಾರ ಬಳಗ ಹುಡುಕಬೇಕಾಗಿದೆ. ಹೊಸ ಕಥೆ ಹೊಸ ತಂಡ ಎಲ್ಲರನ್ನು ಒಟ್ಟುಗೂಡಿಸಿ ಶ್ರೀನಿಯವರು ಬಿಸಿ ಬಿಸಿ ಖಾರ ಖಾರ ಕೋಡುಬಳೆ ರೆಡಿ ಮಾಡಲಿದ್ದಾರೆ. ಹೊಸಬರ ಹೊಸ ಪ್ರಯತ್ನಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಬೆಂಬಲ ಸದಾ ಇದ್ದೆ ಇರುತ್ತದೆ ಆಲ್ ದಿ ಬೆಸ್ಟ್ ಶ್ರೀನಿ ಅಂಡ್ ಟೀಂ.

Pranitha bags Brahma


Sandalwood actress Pranitha Subash, who is busy with films in Kannada and Tamil, has bagged another biggie back home. The actress has been roped in to star opposite Real Star Upendra in director R Chandru's Brahma. Pranitha, though, we hear, was not the Charminar makers first choice. Chandru had, apparently approached Trisha for the film, but she was allegedly not keen to do a Kannada project, even though her film RUM will bring her to Sandalwood.

Then it was the turn of Sarathee actress Deepa Sannidhi, but she is rumoured to have quoted a remuneration package that Chandru could not offer. According to a source, he then turned to Pranitha, who quickly lapped it up. Brahma is scheduled to be launched on May 16, after Upendra's return from his Dubai holiday.

Meanwhile, Pranitha's next Kannada release is the remake of the Tamil film Pizza, called Whistle, which will see her with Chiranjeevi Sarja.

Monday, May 13, 2013

ಭಾರಿ ವಿವಾದದಲ್ಲಿ ಉಪೇಂದ್ರ 'ಬಸವಣ್ಣ' ಪೋಸ್ಟರ್

ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಲಿರುವ 'ಬಸವಣ್ಣ' ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಚಿತ್ರದ ಪೋಸ್ಟರ್ ಭಾರಿ ಚರ್ಚೆಗೆ ಗ್ರಾಸವಾಗಿದೆ. ಚಿತ್ರದ ಶೀರ್ಷಿಕೆಯೇನೋ 'ಬಸವಣ್ಣ' ಎಂದಿದೆ. ಆದರೆ ಅದೇ ಶೀರ್ಷಿಕೆ ಜೊತೆ ಗನ್ ಸಹ ಇರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಬಸವಣ್ಣ ಚಿತ್ರವನ್ನು ನಿರ್ದೇಶಿಸುತ್ತಿರುವವರು ದಂಡುಪಾಳ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶ್ರೀನಿವಾಸರಾಜು. ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಫಸ್ಟ್ ಲುಕ್ ಬಸವ ಜಯಂತಿ (ಮೇ.13) ದಿನವೇ ಬಿಡುಗಡೆಯಾಗಿರುವುದು ಇನ್ನಷ್ಟು ಅನುಮಾನಗಳಿಗೆ ಎಡೆಮಾಡಿದೆ.

ಈ ಬಗ್ಗೆ ವಿವರಣೆ ನೀಡಿರುವ ಶ್ರೀನಿವಾಸರಾಜು ಅವರು, "ಇದು ಚಿತ್ರದ ಫಸ್ಟ್ ಲುಕ್ ಅಷ್ಟೇ. ತಮ್ಮ ಚಿತ್ರಕ್ಕೂ ಬಸವಣ್ಣನವರಿಗೂ ಯಾವುದೇ ಸಂಬಂಧವಿಲ್ಲ. ತಮ್ಮ ಚಿತ್ರದ ನಾಯಕನ ಹೆಸರು ಬಸವಣ್ಣ ಅಷ್ಟೇ" ಎಂದಿದ್ದಾರೆ. ಆದರೆ ಚಿತ್ರದ ಶೀರ್ಷಿಕೆಯನ್ನು 'ಬಸವಣ್ಣ' ಎಂದಿಟ್ಟಿದ್ದರೆ ಯಾವುದೇ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ಧ್ಯಾನಸ್ಥ ಮುದ್ರೆ, ರುದ್ರಾಕ್ಷಿ, ವಿಭೂತಿಯನ್ನೂ ತೋರಿಸಲಾಗಿದ್ದು ಇವೆಲ್ಲವೂ ಬಸವಣ್ಣನವರ ಭಕ್ತಿಭಾವಗಳನ್ನು ಪ್ರತಿನಿಧಿಸುವಂತಿವೆಯಲ್ಲಾ ಎಂದರೆ.... ಶ್ರೀನಿವಾಸರಾಜು ಹೇಳುವುದೇನೆಂದರೆ...ಇದು ಕೇವಲ ಫಸ್ಟ್ ಲುಕ್ ಅಷ್ಟೇ. ಇದನ್ನು ನೋಡಿ ಬಸವಣ್ಣನವರಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ. ಚಿತ್ರ ಬಿಡುಗಡೆ ಆದ ಮೇಲೆ ವಿವಾದಿತ ಸನ್ನಿವೇಶಗಳಿದ್ದರೆ ಆಗ ಮಾತನಾಡಿ. ಈಗಲೇ ಚಿತ್ರಕಥೆ ಬಗ್ಗೆ ಮಾತನಾಡುವುದು ಬೇಡ ಎಂದಿದ್ದಾರೆ. ಚಿತ್ರದಲ್ಲಿ ಗನ್ ಇದ್ದ ಮಾತ್ರಕ್ಕೆ ಯಾಕೆ ತಪ್ಪಾಗಿ ಕಾಣಬೇಕು. ಫಸ್ಟ್ ಲುಕ್ ನೋಡಿ ಜಡ್ಜ್ ಮಾಡಬೇಡಿ. ಚಿತ್ರ ರಿಲೀಸ್ ಆಗಲಿ. ಆಗ ವಿವಾದಾತ್ಮಕ ಅನ್ನಿಸಿದರೆ ಆಗ ಮಾತನಾಡೋಣ ಎಂದಿದ್ದಾರೆ. ಶಿವ, ಗಣೇಶ, ಕೃಷ್ಣ ಎಂದಿಟ್ಟು ಅಲ್ಲೂ ಗನ್ ಮಚ್ಚು ಲಾಂಗು ಕೊಡಲ್ಲವೇ? ಹಾಗಂತ ಆ ಚಿತ್ರಗಳೆಲ್ಲವನ್ನೂ ತಪ್ಪು ಎಂದು ಹೇಳಕ್ಕಾಗುತ್ತದೆಯೇ ಎಂಬುದು ಶ್ರೀನಿವಾಸರಾಜು ಅವರ ವಿವರಣೆ.

Monday, May 6, 2013

Upendra's Brahma first look out (photoshoot)

ಇದೇ ಮೊದಲ ಬಾರಿಗೆ ಆರ್ ಚಂದ್ರು ಅವರು ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಆಕ್ಷ ಕಟ್ ಹೇಳುತ್ತಿದ್ದಾರೆ. ಇವರಿಬ್ಬರ ಕಾಂಬಿನೇಷನ್ ಚಿತ್ರಕ್ಕೆ 'ಬ್ರಹ್ಮ' ಎಂದು ಹೆಸರಿಟ್ಟಿರುವುದು ಗೊತ್ತೇ ಇದೆ. ಈ ಚಿತ್ರದ ಫಸ್ಟ್ ಲುಕ್ ಫೋಟೋಗಳನ್ನು ಬಿಡುಗಡೆ ಮಾಡಲಾಗಿದೆ. ಬುದ್ಧಿವಂತ ನಿರ್ದೇಶಕ ಹಾಗೂ ನಟನೊಬ್ಬನೊಂದಿಗೆ ಕೆಲಸ ಮಾಡುತ್ತಿರುವುದಕ್ಕೆ ಸಂತಸವಾಗುತ್ತಿದೆ ಎನ್ನುವ ಆರ್ ಚಂದ್ರು ಅವರು, ಈ ಚಿತ್ರದ ಮೂಲಕ ಹೊಸ ಮ್ಯಾಜಿಕ್ ಮಾಡಲು ಮುಂದಾಗಿದ್ದಾರೆ. ಚಾರ್ ಮಿನಾರ್ ಚಿತ್ರದ ಬಳಿಕ ಚಂದ್ರು ನಿರ್ದೇಶಿಸುತ್ತಿರುವ ಚಿತ್ರ ಇದಾಗಿದೆ. ಬ್ರಹ್ಮ ಚಿತ್ರವನ್ನು ಮಂಜುನಾಥ ಬಾಬು ಅವರು ಸರಿಸುಮಾರು ರು.30 ಕೋಟಿ ಬಜೆಟ್ ನಲ್ಲಿ ನಿರ್ಮಿಸುತ್ತಿದ್ದಾರೆ. ಅಂದಹಾಗೆ ಇದು ಕನ್ನಡ, ತೆಲುಗಿನ ದ್ವಿಭಾಷಾ ಚಿತ್ರ. 'The Leader' ಎಂಬುದು ಚಿತ್ರದ ಅಡಿಬರಹ.
ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಎರಡೂ ಭಾಷೆಗಳಿಗೆ ಹೊಂದುವ ಕಲಾವಿದರು ಚಿತ್ರದಲ್ಲಿರುತ್ತಾರೆ. ಇದೊಂದು ಪಕ್ಕಾ ಆಕ್ಷನ್ ಚಿತ್ರ ಎಂದಷ್ಟೇ ಹೇಳಿದ್ದಾರೆ ಚಂದ್ರು. ಚಿತ್ರದ ಫಸ್ಟ್ ಲುಕ್ ಚಿತ್ರಗಳನ್ನು ನೋಡುತ್ತಿದ್ದರೆ ಇದೊಂದು ಸೋಷಿಯೋ ಫ್ಯಾಂಟಸಿ ಚಿತ್ರ ಎಂಬ ಭಾವನೆ ಬರುತ್ತದೆ.
ಇದೇನಪ್ಪಾ ಇದು ಗೆಟಪ್? ಆದರೆ ಈ ಗೆಟಪನ್ನು ಯಾವುದಾದರೂ ಹಾಡಿನಲ್ಲೂ ಬಳಸಿಕೊಂಡಿರಬಹುದಲ್ಲವೆ? ಚಿತ್ರದ ನಾಯಕಿ ಯಾರು? ಪಾತ್ರವರ್ಗದಲ್ಲಿ ಯಾರು ಇರುತ್ತಾರೆ ಎಂಬ ವಿವರಗಳು ಇನ್ನಷ್ಟೇ ಹೊರಬೀಳಬೇಕು.



ಇದೇ ಕಥೆಯನ್ನು ಆರ್ ಚಂದ್ರು ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಹೇಳಿದ್ದರಂತೆ. ಆದರೆ ಅವರು ಈಗ ಟೈಮಿಲ್ಲ ಎಂದು ಹೇಳಿದ್ದರಂತೆ. ಈಗ ಅದೇ ಕಥೆಗೆ ಹೊಸ ಶೀರ್ಷಿಕೆ ಕೊಟ್ಟು ಉಪ್ಪಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ ಎಂಬ ಸುದ್ದಿಯೂ ಇದೆ.
ಶಿವಣ್ಣ ಜೊತೆಗಿನ ಮೈಲಾರಿ ಚಿತ್ರದ ಬಳಿಕ ಚಂದ್ರು ಇದೇ ಕಥೆಯನ್ನು ಹೇಳಿ ಚಿತ್ರಕ್ಕೆ ಮಲ್ಲೇಶಿ, ದಿ ಲೀಡರ್ ಎಂದು ಹೆಸರಿಟ್ಟಿದ್ದರಂತೆ. ಆದರೆ ಕಾರಣಾಂತಗಳಿಂದ ಶಿವಣ್ಣ ಒಲ್ಲೆ ಎಂದ ಮೇಲೆ ಇದೇ ಪ್ರಾಜೆಕ್ಟ್ ಉಪ್ಪಿ ಮುಂದೆ ಬಂತು ಎಂಬ ಮಾತುಗಳು ಕೇಳಿಬರುತ್ತಿವೆ.
ಟೋಪಿವಾಲ ಚಿತ್ರದ ಬಳಿಕ ಉಪೇಂದ್ರ ಒಪ್ಪಿಕೊಳ್ಳುತ್ತಿರುವ ಚಿತ್ರ ಇದಾಗಿದೆ. ಟೋಪಿವಾಲ ಚಿತ್ರದ ಬಾಕ್ಸ್ ಆಫೀಸಲ್ಲಿ ಸದ್ದು ಮಾಡಿತಾದರೂ ಉಪ್ಪಿ ವೃತ್ತಿಜೀವನದಲ್ಲಿ ತಿರುವು ನೀಡುವ ಚಿತ್ರ ಎನ್ನಿಸಿಕೊಳ್ಳಲಿಲ್ಲ. ಈಗ ಬ್ರಹ್ಮ ಚಿತ್ರದ ಬಗ್ಗೆ ಅವರು ಆಸಕ್ತಿ ತೋರಿರುವುದು ಅವರ ಅಭಿಮಾನಿ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಈ ಚಿತ್ರದ ಹಾಡುಗಳ ಧ್ವನಿಮುದ್ರಣ ನಡೆದಿದೆ. ಗುರುಕಿರಣ್ ಅವರ ಸಂಗೀತ ಚಿತ್ರಕ್ಕಿರುವುದು ವಿಶೇಷ. ಥ್ರಿಲ್ಲರ್ ಮಂಜು ಅವರ ಸಾಹಸ ಹಾಗೂ ಶೇಖರ್ ಚಂದ್ರ ಅವರ ಛಾಯಾಗ್ರಹಣ ಚಿತ್ರಕ್ಕಿದೆ.




Real Star Upendra and director R Chandru's Brahma first look has been released on internet. The first poster of the film was directly released earlier today by the filmmaker. The photoshoot of the film was held on May 4. R Chandru released the first look and wrote, "Here goes the first pic of #Bramha." In one of the posters, Uppi, Gurukiran and the director are seen. According to reports, Brahma is coming up with the tagline - The Leader. The film is simultaneously made with the budget of Rs 30 crore. Actors from Telugu and Kannada industries will be working in the project. However, it has to be noted that the project was earlier offered to Shivaraj Kumar, but he denied the film as he is busy with other films. Hence, the director approached the Real Star. While Gurukiran will be composing the music, Shekar Chandra will be handling the camera.