Friday, October 21, 2011

Upendra Couple in MTR AD

The super star of Kannada cinema Upendrain the company of his charming actress wifePriyanka has appeared for MTR food products print and visual advertisements.

It is not only liquor ad which Upendra first appeared. Later he worked free forNandini food products following the predecessors like Dr Rajakumar.

Upendra appeared for footwear with Pooja Gandhi and now with his wife Upendra he has appeared for MTR food products.

MTR snacks released for the Deepavali occasion are out in the market. Upendra and Priyanka is with an old lady appeared for the ads. MTR concept is that MTR foods means grandmother staying at home. Such is the ancient quality.

Upendra has used the song line of his film ‘Super’ Sikkapatte Ishta patte while munching ‘Nippat’. Another dialogue from Raktha Kanneeru Kannada film ‘I like it’ is also from the couple at the end of the advertisement

Friday, October 14, 2011

'ಉಪ್ಪಿ'ನ ಕಾಯಿಗೆ ಅಂಬರೀಷ್, ರಮ್ಯಾ ಗರಂ ಮಸಾಲೆ!

ಇದೇನು, ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ರಮ್ಯಾ ಗರಂ ಮಸಾಲೆ ಜಾಹೀರಾತಿನಲ್ಲೇನಾದರೂ ಕಾಣಿಸಿಕೊಳ್ಳುತ್ತಿದ್ದಾರಾ ಅಂತ ನೋಡುತ್ತಿದ್ದೀರಾ? ಸುದ್ದಿ ಅದಲ್ಲ. ಇವರಿಬ್ರೂ ರಿಯಲ್ ಸ್ಟಾರ್ ಉಪೇಂದ್ರ ನಾಯಕನಾಗಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅದೂ ಭ್ರಷ್ಟಾಚಾರದ ಮಹತ್ವವನ್ನು ಸಾರುವ ಚಿತ್ರದಲ್ಲಿ.

ಹಾಗೆಂದು ಇದು ಉಪ್ಪಿ ಮತ್ತು ನಿರ್ದೇಶಕ ಪ್ರೇಮ್ ನಟಿಸಬೇಕಿದ್ದ, ಪ್ರಸಕ್ತ ನೆನೆಗುದಿಗೆ ಬಿದ್ದಿರುವ 'ಗಾಂಧಿನಗರ ಮಹಾತ್ಮೆ' ಅಂತ ತಿಳಿದುಕೊಳ್ಳಬೇಕಾಗಿಲ್ಲ. ಇದು ಅಪ್ಪಟ ಸ್ವಮೇಕ್. ಅದರಲ್ಲೂ ಈ ಹಿಂದೆ ಅತ್ಯುತ್ತಮ ಕಥೆಗಾರ ಅಂತ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದ ನಿರ್ಮಾಪಕ ಮುನಿರತ್ನ ಅವರೇ ಬರೆದಿರುವ ಕಥೆ. ಇನ್ನೂ ಹೆಸರಿಡದ ಈ ಚಿತ್ರದ ನಿರ್ಮಾಣದ ಹೊಣೆಯೂ ಮುನಿರತ್ನ ಅವರದ್ದು.

ಭ್ರಷ್ಟಾಚಾರ, ಅನಾಚಾರ, ವ್ಯವಸ್ಥೆಯಲ್ಲಿನ ಲೋಪಗಳ ವಿರುದ್ಧ ಉಪ್ಪಿ ತನ್ನ ಸಿನಿಮಾಗಳಲ್ಲಿ ಸಂದೇಶ ನೀಡುತ್ತಾ ಬಂದಿರುವುದು ಹೊಸತೇನಲ್ಲ. ಅವರ ನಿರ್ದೇಶನದ ಬಹುತೇಕ ಎಲ್ಲಾ ಚಿತ್ರಗಳಲ್ಲೂ ಇಂತಹ ಅಂಶಗಳಿವೆ. ಆದರೆ ಈ ಬಾರಿ ಹೊಸ ಮಾರ್ಗದಲ್ಲಿ ಇದನ್ನು ವಿವರಿಸಲಾಗುತ್ತಿದೆ. ಹಾಗೆ ವಿವರಿಸುವ ಕ್ಯಾಪ್ಟನ್ ಸಾಧು ಕೋಕಿಲಾ.

ನಿರ್ದೇಶನದೊಂದಿಗೆ ಸಂಗೀತ ನೀಡುವ ಹೊಣೆಯೂ ಕೋಕಿಲಾ ಅವರದ್ದು. ಭ್ರಷ್ಟಾಚಾರದ ವಿರುದ್ಧ ಹೋರಾಡುವ ಚಿತ್ರ ಅಂದ ಕೂಡಲೇ ಸೀರಿಯಸ್ ಸಿನಿಮಾ ಅಂತ ಯಾರೂ ತಿಳಿದುಕೊಳ್ಳಬೇಕಾಗಿಲ್ಲ, ಯಾಕೆಂದರೆ ಇಲ್ಲಿ ಹಾಸ್ಯದ ಮೂಲಕ ಎಲ್ಲವನ್ನೂ ಹೇಳುವ ಯತ್ನ ನಡೆಯಲಿದೆ. ವ್ಯವಸ್ಥೆಯಿಂದ ರೋಸಿ ಹೋದ ಉಪೇಂದ್ರ ಯಮರಾಜನ ಬಳಿ ಹೋಗುತ್ತಾರಂತೆ. ಅಲ್ಲಿ ಯಮರಾಜನಿಗೆ ದೂರು ನೀಡುತ್ತಾರಂತೆ.

ಮೂಲಗಳ ಪ್ರಕಾರ, ಸಿನಿಮಾದಲ್ಲಿ ಯಮನ ಪಾತ್ರ ಮಾಡುತ್ತಿರುವುದು ಅಂಬರೀಷ್. ಅದೇ ಕಾರಣದಿಂದ ಚಿತ್ರಕ್ಕೆ 'ಯಮೇಂದ್ರ ಉಪೇಂದ್ರ' ಅಂತ ಹೆಸರಿಡಲಾಗಿದೆ. ಇದು ಇನ್ನಷ್ಟೇ ಖಚಿತವಾಗಬೇಕಿದೆ. ಅತ್ಯುತ್ತಮ ಶೀರ್ಷಿಕೆ ಬೇರೆ ಏನಾದರೂ ಸಿಕ್ಕಿದಲ್ಲಿ, ಬದಲಾಯಿಸುವ ಸಾಧ್ಯತೆಗಳೂ ಇವೆಯಂತೆ

Wednesday, October 12, 2011

ನಮ್ಮ ಮೆಟ್ರೋ ಶಂಕರ್ ನಾಗ್ ಗೆ ಅರ್ಪಣೆಯಾಗಲಿ

ಶಂಕರ್ ನಾಗ್ ನಮ್ಮನ್ನು ಅಗಲಿ 21 ವರ್ಷ ಕಳೆದರೂ ಅವರು ಮೂಡಿಸಿದ ಛಾಪು ಹಾಗೆ ಇದೆ. ಸಿನೆಮಾ, ಕಿರುತೆರೆಯಲ್ಲಿ ಅವರು ಮಾಡಿರುವ ಕೆಲಸ ಅವರನ್ನು ಇನ್ನೂ ಜೀವಂತವಾಗಿಟ್ಟಿವೆ. ಸಿನೆಮಾ ಮಾತ್ರವಲ್ಲ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಕೂಡ ಶಂಕರ್ ಕನಸು ಕಂಡಿದ್ದರು ಮತ್ತು ಆ ಕನಸು ನನಸು ಮಾಡಲು ಸಾಕಷ್ಟು ಕೆಲಸ ಮಾಡಿದ್ದರು ಎಂದರೆ ನಂಬುತ್ತೀರಾ? ನಂಬಲೇಬೇಕು. ಈ ದೀಪಾವಳಿ ಹಬ್ಬದಂದು ಉದ್ಘಾಟನೆ ಭಾಗ್ಯ ಕಾಣಬಹುದೆಂದು ನಿರೀಕ್ಷಿಸಲಾಗಿರುವ "ನಮ್ಮ ಮೆಟ್ರೋ" ಬಗ್ಗೆ ಶಂಕ್ರಣ್ಣ 25 ವರ್ಷಗಳ ಹಿಂದೆಯೇ ಕನಸು ಕಂಡಿದ್ದರಂತೆ.

ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದ ಶಂಕರ್ ನಾಗ್, ಬೆಂಗಳೂರು ನಗರಕ್ಕೆ ಮೆಟ್ರೋ ರೈಲು, ಅಂಡರ್ ಪಾಸ್, ಫ್ಲೈ ಓವರ್ ಮುಂತಾದವುಗಳ ಅವಶ್ಯಕತೆಯಿದೆ ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೆ ತಮ್ಮ ಸ್ವಂತ ಖರ್ಚಿನಲ್ಲೇ ಮೆಟ್ರೋ ಸಂಚಾರಕ್ಕೆ ಸರ್ವೇ ಕೂಡ ಮಾಡಿಸಿದ್ದರಂತೆ. ತನ್ನ ಆತ್ಮೀಯರನ್ನು ದೆಹಲಿ, ಮುಂಬೈ ಮತ್ತು ಚೆನ್ನೈ ನಗರಕ್ಕೆ ಕಳುಹಿಸಿ ಮೆಟ್ರೋ ಸಂಚಾರದ ಬಗ್ಗೆ ಅಧ್ಯಯನ ಮಾಡಲು ಕಳುಹಿಸಿದ್ದರಂತೆ. ಪ್ರಚಂಡ ಯಶಸ್ಸು ಕಂಡ ತನ್ನ 'ಮಾಲ್ಗುಡಿ ಡೇಸ್' ಧಾರಾವಾಹಿಯ ಪ್ರಶಸ್ತಿ ಸ್ವೀಕರಿಸಲು ಶಂಕರ್ ನಾಗ್ ಲಂಡನ್ ನಗರಕ್ಕೆ ಹೋಗಿದ್ದಾಗ ಅಲ್ಲಿನ ಮೆಟ್ರೋ ರೈಲು ವ್ಯವಸ್ಥೆ ನೋಡಿ ಬೆಂಗಳೂರು ನಗರಕ್ಕೂ ಈ ಸೌಲಭ್ಯ ಬರಬೇಕೆಂದು ಯೋಚಿಸಿ ಕಾರ್ಯಪ್ರವೃತ್ತರಾಗಿದ್ದರಂತೆ.

ಎಂದೂ ಸಮಯ ಪೋಲು ಮಾಡದ ಶಂಕರ್ ನಾಗ್, ಬಡವರ ಮೇಲೆ ಅತೀವ ಕಾಳಜಿ ಹೊಂದಿದ್ದರು. 1986ರಲ್ಲಿ ಯೆಲಹಂಕದಲ್ಲಿ ಒಂದು ಸಾವಿರ ಮನೆಯನ್ನು ಆಸ್ಟ್ರಿಯಾ ದೇಶದ ತಂತ್ರಜ್ಞಾನದ ಮೂಲಕ ನಿರ್ಮಿಸಿದ್ದರು. ಬಡವರಿಗಾಗಿ ಪ್ರತಿ 100 ಕಿಲೋಮೀಟರ್ ಗೆ ಒಂದರಂತೆ ಆಸ್ಪತ್ರೆ ಕಟ್ಟಿಸುವ ಕನಸನ್ನೂ ಶಂಕರ್ ನಾಗ್ ಕಂಡಿದ್ದರು. ಕನ್ನಡ ಚಿತ್ರರಂಗದ ಮತ್ತು ಕನ್ನಡ ನಾಡಿನ ನಿಜವಾದ 'ಕನಸುಗಾರ' ಶಂಕರ್ ನಾಗ್ ಅವರೇ ಅಲ್ಲವೆ?

ಆದರೆ ವಿಧಿ ಆಟ, ಸೆಪ್ಟೆಂಬರ್ 30,1990ರಂದು ಇಡೀ ಕರ್ನಾಟಕ ದಸರಾ ಹಬ್ಬ ಆಚರಿಸುತ್ತರಬೇಕಾದರೆ, ಶಂಕರ್ ನಾಗ್ ರಸ್ತೆ ಅಪಘಾತದಲ್ಲಿ ನಿಧನರಾದರೆನ್ನುವ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತ್ತು. ಎರಡುವರೆ ದಶಕಗಳ ಹಿಂದೆ ಕನಸು ಕಂಡಿದ್ದ ನಮ್ಮ ಶಂಕರ್ ನಾಗ್ ಅವರ ಮೆಟ್ರೋ ರೈಲು ಸಂಚಾರ "ನಮ್ಮ ಮೆಟ್ರೋ" ಮೂಲಕ ಈ ದೀಪಾವಳಿ ಹಬ್ಬಕ್ಕಾದರೂ ಆರಂಭವಾಗಲಿ ಎಂದು ಆಶಿಸೋಣ. ಸಾಧ್ಯವಾದರೆ ನಮ್ಮ ಮೆಟ್ರೋವನ್ನು ಶಂಕರ್ ಗೆ ಸರಕಾರ ಅರ್ಪಿಸಲಿ.

Tuesday, October 11, 2011

Celebrities | Indiaecho

Celebrities | Indiaecho

Upendra To Romance Ramya In Gandhinagarada Mahatme


Upendra shocked with Arakshaka climax

Kannada Star hero Upendra is excited on his upcoming film Arakshaka directed by P. Vasu. Major talkie part is completed and only one song is in pending. P.Vasu has written the story and script with unique and interesting ingredients which Uppi has never seen or heard in his career. He was literally carried away by the strong climax of Arakshaka. This script was not written with Upendra’s image in mind. Later on Vasu made changes as per the body language of Upendra.

Upendra Police in Arakshaka

Kannada super Star Upendra acted in Arakshaka. Upendra featuring as Police officer in Arakshaka. PLease watch Arakshaka Photos. Kannada cinema 'ARAKSHAKA' , 'ARAKSHAKA'